Sunday, March 24, 2013

ನಮಗ್ಯಾಕೆ ಬೇಕು ರಾಜಕೀಯ! ಅದರಿಂದ ನಮಗೆ ಏನು ಪ್ರಯೋಜನ

ನನ್ನ ಕೆಲವು ಸ್ನೇಹಿತರಿಗೆ, ಈ ತರದ ಪ್ರಶ್ನೆಗಳಿಗೆ ಉತ್ತರಿಸಿ ಸಾಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಅಂತೆಲ್ಲ ನಮ್ಮ  ಶಾಲೆಗಳಲ್ಲಿ ಓದಿದ್ದೇವೆ. ಆದರೆ ನಮ್ಮ ಪ್ರಭುಗಳು ಮತ್ತು ಪ್ರಜೆಗಳು ಇಬ್ಬರು ದ್ವಿಮುಖವಾಗುತ್ತಿರುವುದು ವಿಷಾದದ ಸಂಗತಿ.

ನಮ್ಮಲ್ಲಿ ಬಹಳ ರೀತಿಯ ಜನರಿದ್ದಾರೆ. ನಾನು ಇಲ್ಲಿ ಹೇಳುತ್ತಿರುವುದು ಆರ್ಥಿಕವಾಗಿ. ಒಂದು ಉತ್ತಮ ವರ್ಗ, ಸರ್ಕಾರದಿಂದ ಅಷ್ಟೇನೂ ಬಯಸದೆ ತಮ್ಮ ಪಾಡಿಗೆ ತಾವಿರುವ ಮತ್ತು ಮನಸಿದ್ದರೆ ಬಂದು ವೋಟು ಹಾಕುವ ಜನ. ಮತ್ತೊಂದು ಮಧ್ಯಮ ವರ್ಗ, ಇವರು ಸರಿಯಾಗಿ ವೋಟು ಮಾಡುವ ಸರ್ಕಾರದಿಂದ ಸ್ವಚ್ಛ, ಪಾರದರ್ಶಕ ಮತ್ತು ಉತ್ತಮ ಆಡಳಿತವನ್ನು ಬಯಸುವ ಜನ. ಇನ್ನೊಂದು ಆರ್ಥಿಕವಾಗಿ ದುರ್ಬಲ ವರ್ಗ, ಇವರು ಅವರ ಸಮಸ್ಯೆಗಳಿಗೆ ಸ್ಪಂದಿಸುವವರಿಗೆ ವೋಟು ಕೊಡುವ ಜನ.

ನಮ್ಮ ದೇಶದಲ್ಲಿ ನಾವು ಓದಿರುವಂತೆ ಮತ್ತು ನೋಡಿರುವಂತೆ ಆರ್ಥಿಕವಾಗಿ ದುರ್ಬಲ ವರ್ಗದವರೇ ಜಾಸ್ತಿ. ಬಹಳಷ್ಟು ಜನಕ್ಕೆ     Maslow's hierarchy of needs ಬಗ್ಗೆ ಗೊತ್ತಿರಬಹುದು( ಗೊತ್ತಿರದವರು ಇಲ್ಲಿ ಓದಿ - http://en.wikipedia.org/wiki/Maslow's_hierarchy_of_needs). ಮೊದಲು ಮಾನವನಿಗೆ ಬೇಕಾಗಿರುವುದು ಗಾಳಿ, ಊಟ, ವಸತಿ ಮತ್ತು ಆ ಕ್ಷಣದ ಅನುಕೂಲಗಳು. ಇದರಿಂದಾಗಿಯೇ ಬಹಳ ಜನ ನಮ್ಮಲ್ಲಿ ದುಡ್ಡು ತಗೊಂಡು ವೋಟು ಹಾಕುವುದು ಅಥವಾ ವಿವೇಚನೆ ಇಲ್ಲದೆ ವೋಟು ಹಾಕುವುದು ಎಂಬುದು ನನ್ನ ಅನಿಸಿಕೆ(ಇದು ತಪ್ಪು ಇರಲು ಬಹುದು, ನೀವು ಯೋಚಿಸಿ)

ಆದರೆ ಅರ್ಥಿಕ ಸ್ಥಿತಿ ಉತ್ತಮವಾದಂತೆ ಈ ರೀತಿಯ ಪರಿಸ್ಥಿತಿ ಬದಲಾಗುತ್ತಾ ಹೋಗುತ್ತದೆ. ಇದರ ಬಗ್ಗೆ ಅಷ್ಟೇನೂ ತಲೆಯ ಕೆಡಿಸಿ ಕೊಳ್ಳುವ ಅಗತ್ಯ ಇಲ್ಲ. ಆದರೆ ನಮ್ಮ ಮನಸ್ಥಿತಿ ದೇಶವೇ ಹೀಗೆ, ನಮ್ಮ ಜನ ಒಳ್ಳೆವರನ್ನ ಗೆಲ್ಲಿಸುವುದಿಲ್ಲ, ಗೆದ್ದರೂ ಅವರು ಕೆಲಸ ಮಾಡುವುದಿಲ್ಲ ಅನ್ನುವ ಮನೋಭಾವ ಬದಲಾಗಬೇಕಿದೆ. ನಮ್ಮಲ್ಲಿ ಬದಲಾವಣೆಗಳು ಆಗುತ್ತಿವೆ, ಆದರೆ ಅದು ನಿಧಾನವಾಗಿ ನಡೆಯುತ್ತಲೇ ಇವೆ. RTI, ಭೂಮಿ (http://bhoomi.karnataka.gov.in/landrecordsonweb/) ಮತ್ತು ಸಕಾಲ ನನಗೆ ತಿಳಿದಿರುವಂತೆ ಉತ್ತಮ ಯೋಜನೆಗಳೇ. It takes time ಅಷ್ಟೇ! 


ಇನ್ನೇನು ಕರ್ನಾಟಕದ ವಿಧಾನಸಭೆಗೆ ಚುನವಾಣೆ ಘೋಷಣೆಯಾಗಿದೆ. ನಮ್ಮ ದೇಶವೇ ಹೀಗೆ ಉದ್ದರವಾಗೋಲ್ಲ, ನಮ್ಮ ಜನಾನೇ ಹೀಗೆ ಅನ್ನುವುದನ್ನ ಬಿಟ್ಟು. ನಾವೆಲ್ಲಾ ವೋಟು ಹಾಕೋಣ, ಮತ್ತು ಮತ್ತೆ ಕೆಲವರಲ್ಲಿ ಜಾಗೃತಿ ಮೂಡಿಸಿ  ಅವರು ಸರಿಯಾದ ಅಭ್ಯರ್ಥಿಗಳಿಗೆ ವೋಟು ಹಾಕುವಂತೆ ಪ್ರೋತ್ಸಾಹಿಸೋಣ. 

ನನ್ನದೊಂದು ಕೋರಿಕೆ: ನನ್ನ ಸ್ನೇಹಿತರು, ಜೊತೆಯಲ್ಲಿ India Against Corruptionನಲ್ಲಿ ಕೆಲಸ ಮಾಡಿದ ಯೋಗೇಶ್ ದೇವರಾಜ್ (https://www.facebook.com/YogeshDevarajForMLA) ಬ್ಹೊಮ್ಮನಹಳ್ಳಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುತ್ತಿರುವರು. ಯೋಗೇಶ್, ಬೆಂಗಳೂರಿನ RVCEಯಲ್ಲಿ ಓದಿ ಸರಿಸುಮಾರು ೨೦ ವರ್ಷ ಸಾಫ್ಟ್ವೇರ್ ಕಂಪನಿಗಳಲ್ಲಿ ಕೆಲಸ ಮಾಡಿ(ಅದರಲ್ಲಿ ೧೩ ವರ್ಷ ಅಮೇರಿಕದಲ್ಲಿ) ಈಗ ನಮ್ಮೆಲ್ಲರ ಒತ್ತಾಯಕ್ಕೆ, ಚುನಾವಣಾ ಕಣದಲ್ಲಿ ಇದ್ದಾರೆ. ದಯವಿಟ್ಟು ನೀವು ಅವರ ಬಗ್ಗೆ ಇಲ್ಲಿ "http://www.yogeshdevaraj.in/" ಮತ್ತಷ್ಟು ತಿಳಿದುಕೊಳ್ಳಿ. ನಿಮಗೆ ಈ ವ್ಯಕ್ತಿ ಉತ್ತಮ ಎಂದು ಅನಿಸಿದರೆ ಮಾತ್ರ ದಯವಿಟ್ಟು ಸ್ವಲ್ಪ ಸಹಾಯ ಮಾಡಿ. ಅವರ ಬಗ್ಗೆ ಜನಾಭಿಪ್ರಾಯ ಬೆಳೆಸಿ(https://www.facebook.com/YogeshDevarajForMLA), ಆದರೆ  ಸ್ವಲ್ಪ ಹಣ ಸಹಾಯ ಮಾಡಿ, ನಮ್ಮ ಜೊತೆ ಬಂದು ಮನೆ ಮನೆ ಸುತ್ತಿ ಜನರಲ್ಲಿ ಜಾಗ್ರತಿ ಮೂಡಿಸಿ.
ನಮ್ಮ ಕಚೇರಿಯಲ್ಲಿ ಕಂಡ ಪೋಸ್ಟರ್! Be A Hero
ಯೋಗೇಶ್ರವರ ಕಿರು ಪರಿಚಯ


Monday, February 25, 2013

ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರ ಜಯಂತ್ಯೋತ್ಸವ- ೨೦೧೩ ಮಾರ್ಚ್ ೨೩

ಈ ಬ್ಲಾಗಿನಲ್ಲಿ ನಾನು ಬರೆಯುವುದು ಬಹಳ ಕಡಿಮೆಯೇ! ನನ್ನ ಪ್ರವಾಸಗಳ ಪ್ರವಚನ ಮತ್ತು updateಗಳು ಇನ್ನೊಂದು www.pakkapravasi.blogspot.com ಅಲ್ಲಿ ಲಭ್ಯ. ಹೊದ ವರ್ಷ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರ  ಜಯಂತ್ಯೋತ್ಸವದ ಬಗ್ಗೆ ಬರೆದಿದ್ದೆ. ಮತ್ತೆ ಈ ವರ್ಷವೂ ಬರೆಯೋಣ ಅಂದುಕೊಂಡಾಗ ಈ ಬ್ಲಾಗ್ ನೆನಪಾಯಿತು.

ಮೊನ್ನೆ  ಆಫೀಸಿನಲ್ಲಿ ಒಬ್ಬ ಸ್ನೇಹಿತ ಕೇಳ್ತಿದ್ದ ತೋಟದಪ್ಪನವರಿಗೆ ಯಾರು ಮಕ್ಕಳಿರಲಿಲ್ಲವ ಅಂತ, ನನ್ನ ಬಾಯಿಂದ ಥಟ್ಟನೆ ಬಂದ ಉತ್ತರ ನಾವೆಲ್ಲಾ ಅವರ ಮಕ್ಕಳೇ ಎಂದು(ಇದು ಸಿನಿಮೀಯ ಅನಿಸಿದರು ಸತ್ಯ ಘಟನೆ). ಅಲ್ಲಿ ಓದಿದ ಎಲ್ಲರಿಗೂ ಊಟ-ವಸತಿ ಕೊಟ್ಟು ಮತ್ತು ಬದುಕಲು ಬೇಕಾದ ಎಲ್ಲ skillsಗಳನ್ನ ಕಲಿಸಿದ ಹಾಸ್ಟೆಲ್ ಅದು(ತಿಗಣೆಯನ್ನೂ ಸ್ನೇಹಿತನನ್ನಾಗಿ ಮಾಡಿದ ಹಾಸ್ಟೆಲ್ ಅಂದರೂ ಅದು ಅತಿಶಯೋಕ್ತಿಯಾಗಲಾರದು). ಇಂಥಹ ಒಂದು ಸುಂದರ ಛತ್ರದ/ಹಾಸ್ಟೆಲಿನ ಕರ್ತೃವಿನ ಜಯಂತ್ಯೋತ್ಸವವನ್ನ ಹಳೆಯ ವಿದ್ಯಾರ್ಥಿಗಳ ಬಳಗ ಮೊನ್ನೆ ೨೩ ಫೆಬ್ರವರಿಯಂದು ಹಾಸ್ಟೆಲಿನ ಆವರಣದಲ್ಲಿ ಆಚರಿಸಿತು.

ಅದು ರಕ್ತದಾನದ ಮೂಲಕ ಮತ್ತು ಅಲ್ಲಿರುವ ವಿದ್ಯಾರ್ಥಿಗಳಿಗೆ ಸ್ವಲ್ಪ ಜ್ಞಾನ ದಾಸೋಹದ ಮೂಲಕ... ನಮ್ಮ ವಿದ್ಯಾರ್ಥಿ ನಿಲಯದ ಧರ್ಮದರ್ಶಿ ರೇವಣ್ಣಸಿದ್ದಯ್ಯನವರು ಹೇಳಿದಂತೆ ಅಲ್ಲಿ ದಾನ ಮಾಡಿದ ರಕ್ತ ಪವಿತ್ರವಾದ, ಶುಭ್ರವಾದ, ಒಳ್ಳೆಯ ಮನಸ್ಸಿನಿಂದ ಮತ್ತು ಒಳ್ಳೆಯ ಉದ್ದೇಶಕ್ಕೆ ದಾನ ಮಾಡಿದ ರಕ್ತ. ಅದೂ ತೋಟದಪ್ಪನವರಂಥ ಮಹಾನ್ ದಾನಿಯ ನೆನಪಿನಲ್ಲಿ! ಸರಿಯಾಗಿ ೯೩ unitಗಳ ರಕ್ತವನ್ನು ದಾನ ಮಾಡಲಾಯಿತು. ಈ ಕಾರ್ಯಕ್ರಮವನ್ನು ಹಿರಿಯ ವಿದ್ಯಾರ್ಥಿ ಬಳಗ, ರೆಡ್ ಕ್ರಾಸ್ ಸಹಯೋಗದಿಂದ ಆಯೋಜಿಸಲಾಗಿತ್ತು. 

ರಕ್ತದಾನ ಮಾಡಿದ ಹಳೆಯ ಮತ್ತು ಈಗಿನ ವಿದ್ಯಾರ್ಥಿಗಳು!

ಸ್ವಲ್ಪ ತಡವಾಗಿ ಶುರುವಾದರೂ, ಬಹಳ ಬೇಗ ಅದರ ವೇಗವನ್ನು ಪಡೆದುಕೊಂಡಿತು. ರಕ್ತದಾನ ಕಾರ್ಯಕ್ರಮನ್ನ ಉದ್ಘಾಟಿಸಿ ಮಾತನಾಡಿದ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ಶ್ರೀ ಜಯಲಿನ್ಗಪ್ಪನವರು, ರಕ್ತದಾನದ ಮಹತ್ವ ಮತ್ತು ಅವರ ಅನುಭವಗಳನ್ನ ಮೆಲುಕು ಹಾಕಿದರು. ರೆಡ್ ಕ್ರಾಸ್ ಸಂಸ್ಥೆಯ ಡಾ|| ದಿವ್ಯಶ್ರೀ ರಕ್ತದಾನದ ಮಹತ್ವ, ಅವಶ್ಯಕತೆಗಳ ಬಗ್ಗೆ ತಿಳಿಸಿದರು. ಮಾತು ಮುಗಿದ ತಕ್ಷಣ ರಕ್ತದಾನ ಶುರುವಾಯಿತು. ಮೊದಲ ಬಾರಿಗೆ ರಕ್ತದಾನ ಮಾಡಿದ ನನ್ನ ಮಿತ್ರರು ರಾಜೇಶ್, ಅರುಣ್ ಮತ್ತು ಗೋಕುಲ್ ಬಹಳ ಸಂತೃಪ್ತಿಯಿಂದ ಕಂಡಿದ್ದು ಕಂಡು ಬಂತು.

ಉದ್ಯಮಿಯಾಗು, ಉದ್ಯೋಗ ನೀಡು!
ಮಧ್ಯಾನ, ಉದ್ಯಮಿಯಾಗು ಮತ್ತು ಉದ್ಯಮಿಯಾಗು ಎಂಬ ವಿಷಯದ ಮೇಲೆ ಡಾ|| ಚಂದ್ರಶೇಕರನ್ ಅವರ ಅನುಭವಗಳನ್ನ ಹಂಚಿಕೊಂಡರು. ಅವರ ಏಳು ಬೀಳುಗಳು, ಉದ್ಯಮಿ ಆಗಬೇಕಾದರೆ ಪಟ್ಟ ಶ್ರಮಗಳ ಪರಿಚಯವನ್ನ ಮಾಡಿಕೊಟ್ಟರು. ಅವರ ಅರ್ಧಾಂಗಿ "ಪೂರ್ತಿ-ಅಂಗಿಯಾಗಿ" ಕೆಲಸ ಮಾಡಿದ ತಮ್ಮ ದಿನಗಳ ಪುಟ ತೆರೆದಿಟ್ಟರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅದ್ಯಕ್ಷರು ಶ್ರೀ ಶಿವಾನಂದ್ ಮತ್ತು ಧರ್ಮದರ್ಶಿ ರೇವಣ್ಣಸಿದ್ದಯ್ಯನವರು ಉಪಸ್ಥಿತರಿದ್ದರು. 


Saturday, March 17, 2012

ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರ ಜಯಂತ್ಯೋತ್ಸವ- ೨೦೧೨ ಮಾರ್ಚ್ ೧೦

ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರ ಜಯಂತ್ಯೋತ್ಸವವನ್ನು ಬಹಳ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿ ಇತ್ತೀಚಿಗೆ ಅಂದರೆ ೨೦೧೨ ಮಾರ್ಚ್ ೧೦ರಂದು ಹಿರಿಯ ವಿದ್ಯಾರ್ಥಿ ಬಳಗ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆಯ ಸಹಯೋಗದಲ್ಲಿ ಆಚರಿಸಿತು. ಬೆಂಗಳೂರಿನ ವಾಹನ ದಟ್ಟನೆ ಈ ಕಾರ್ಯಕ್ರಮಕ್ಕೂ ತನ್ನ ಇರುವಿಕೆಯನ್ನು ತೋರಿಸಿತ್ತು, ಸ್ವಲ್ಪ ತಡವಾಗಿಯೇ ಕಾರ್ಯಕ್ರಮ ಶುರುವಾಗಲು ಕಾರಣವಾಯಿತು! ಕಾರ್ಯಕ್ರಮಕ್ಕೆ ಮುನ್ನವೇ ಬಡಿಸಿದ ಕೇಸರಿಬಾತು ಉಪ್ಪಿಟ್ಟು ಬಾಯಿಗೆ ರುಚಿಯನ್ನು, ಬಡಿಸುತಿದ್ದ ನಮ್ಮ ನಿಲಯದ ಭಟ್ಟರ ನಗು ಮನಸಿಗೆ ಖುಷಿಯನ್ನು ನೀಡಿತು. ಮೊದಲಿಗೆ ವಚನ ಗಾಯನ ಕಾರ್ಯಕ್ರಮ ನಿಗದಿಯಾಗಿತ್ತು, ಖ್ಯಾತ ಹಿಂದುಸ್ಥಾನಿ ಗಾಯಕರಾದ ಪಂಡಿತ್ ಶಿವಾನಂದ ಹೆರೂರ ತಮ್ಮ ವಚನಗಳ ಮೂಲಕ ನೆರೆದಿದ್ದ ಹಿರಿಯ ಮತ್ತು ನಿಲಯದ ವಿದ್ಯಾರ್ಥಿಗಳ ಗಮನ ಸೆಳೆದರು, ಸ್ವಲ್ಪ ನಿದ್ದೆಯನ್ನೂ ಬರಿಸಿದರು ಎಂದರೂ ತಪ್ಪಿಲ್ಲ, ಎಲ್ಲರೂ ಅಷ್ಟು ಮಗ್ನ ಭಾವದಿಂದ ವಚನಗಾಯನವನ್ನ ಆಲಿಸಿದರು. ಮುಖ್ಯ ಅತಿಥಿಗಳಾಗಿ ಐ.ಎ.ಎಸ್. ಅಧಿಕಾರಿ ಡಾ|| ಸಿ ಸೋಮಶೇಖರ ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಜಯಲಿಂಗಪ್ಪನವರು ವಹಿಸಿದ್ದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶ್ರೀ ರೇವಣ್ಣಸಿದ್ದಯ್ಯಐ.ಪಿ.ಎಸ್ ಮತ್ತು ಹಿರಿಯ ಧರ್ಮದರ್ಶಿಗಳು ಹಾಗು ಹಳೆಯ ವಿದ್ಯಾರ್ಥಿಗಳೂ ಆದ ಶ್ರೀ ರಾಜೇಶ್ವರ ಶಾಸ್ತ್ರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳ ಬಳಗದ ಅಧ್ಯಕ್ಷರಾದ ಶ್ರೀ ಚಿಕ್ಕಕರಿಯಪ್ಪ ಮತ್ತು ಮತ್ತೊಬ್ಬ ಹಿರಿಯ ವಿದ್ಯಾರ್ಥಿ ಹಾಗು ಖ್ಯಾತ ನಿರೂಪಕ ಶ್ರೀ ಹರೀಶ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ಮಾತನಾಡಿ ತಮ್ಮ ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿನ ಅನುಭವಗಳನ್ನ ಮತ್ತು ಬದುಕಿನ ಯಶೋಗಾಥೆಗೆ ತೋಟದಪ್ಪ ನಿಲಯದ ಕೊಡುಗೆಯನ್ನು ಸ್ಮರಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸೋಮಶೇಖರ್ ವಿದ್ಯಾರ್ಥಿಗಳಿಗೆ ತಮ್ಮ ಎಂದಿನ ಶೈಲಿಯಲ್ಲಿ ಮಾರ್ಗದರ್ಶನ ಮಾಡಿದರು. ಅವರ ಮಾತುಗಳನ್ನು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರೆಲ್ಲರೂ ಏಕ ಚಿತ್ತದಿಂದ ಆಲಿಸುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು. ಸ್ವಲ್ಪ ಹಾಸ್ಯ, ಸ್ವಲ್ಪ ವೇದಾಂತ ಮತ್ತು ಸ್ವಲ್ಪ ಬುದ್ದಿ ಮಾತುಗಳಿಂದ ಎಲ್ಲರ ಮನ ಸೂರೆಗೊಂಡರು. ನಂತರ ಮಾತನಾಡಿದ ಶ್ರೀ ರೇವಣ್ಣಸಿದ್ದಯ್ಯನವರು ಎಂದಿನಂತೆ ವಿದ್ಯಾರ್ಥಿ ಜೀವನದ ಮುಖ್ಯ ಕರ್ತವ್ಯಗಳನ್ನ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟು, ಇಂಥಹ ಸುಂದರ ಕಾರ್ಯಕ್ರಮವನ್ನ ಆಯೋಜಿಸಿದ ಹಿರಿಯ ವಿದ್ಯಾರ್ಥಿ ಬಳಗದ ಶ್ರಮವನ್ನ ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಜಯಲಿಂಗಪ್ಪನವರು ಮಾತನಾಡಿ ವಿದ್ಯಾರ್ಥಿಗಳಿಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಹೇಮಚಂದ್ರ ಸಾಗರ್ ರವರು ವಿದ್ಯಾರ್ಥಿಗಳಿಗೆ ಸಂದರ್ಶನ ತರಬೇತಿ ನೀಡಿದರು.ಒಟ್ಟಿನಲ್ಲಿ ಒಂದು ಸುಂದರ ಸಂಜೆಗೆ ತೋಟದಪ್ಪನವ ಜಯಂತ್ಯೋತ್ಸವ ಅನುವು ಮಾಡಿ ಕೊಟ್ಟಿತು.

ಕೊನೆಗೆ ಎಲ್ಲರೂ ಸೇರಿ ಕೊಟ್ಟ ಪೋಸು ಇಲ್ಲಿದೆ ನೋಡಿ. ಯಾರಾದರೂ ಈ ಚಿತ್ರದಲ್ಲಿ ಇಲ್ಲದಿದ್ದರೆ ದಯವಿಟ್ಟು ಮುಂದಿನ ಕಾರ್ಯಕ್ರಮದಲ್ಲಿ ಮುಗಿಯುವ ತನಕ ಕಾಯಬೇಕಾಗಿ ಕೊರಿಕೊಳ್ಳುತ್ತೇವೆ..:-)

Saturday, September 25, 2010

It is a matter of our lab's credibility!

We were on track, we have been undergoing loooooooooong working days since many days, that day it was a 1x1 meeting with my manager. He was so upset that we may miss a schedule(though we completed all tasks before schedule date). While talking he said we should be focused and "It is a matter of our lab's credibility", If we miss any schedule we may lose that credibility globally.....

Enough, i am not going to write here about my office story. But I am really worried how can our administrators/bureaucrats and (I don't know which adjective i need to use here) Politicians miss many schedules, many targets in organizing Commonwealth Games. Yes, it is a matter of our country's credibility in world, it is a matter of our country's will to execute one of the big sport event. The statement made by manager made me ponder not about the lab but about the country. while on my way back to home I was thinking what could be the reasons..due to our bureaucrats? politicians? or lack of commitment in government bodies or lack of people like my manager in government sector and many, list goes on...and again people of country helpless!

The only thing we can do for the success of CWG is to watch games. Lets do that...Wish all the very best to CWG..:)

Last byte:If I find suresh kalmadi, definitely something will happen...baddi maga!

Sunday, May 16, 2010

2nd speech in Toastmaster's

Since 2 weeks, I had seen 3 bore wells being dug near my hostel. They were dug more than 1000 feet deep. Two points did not produce any water, the other one pumped very less water. It is not only the case with hyderabad. The same saga goes everywhere.

I have been wondering these days that in next few years we may empty most of the natural resources available on the planet? We are already in short of basic necessities like drinking water, electricity, petroleum products. The temperature of the earth has been drastically increasing. I still remember, the temperature was just 26 to 28 in Mysore when I was doing lab experiments in my class 12, the temperature is 35 to 37 now in Mysore.

It is already late, still it is possible to do our bit to conserve few resources. India celebrates August 20th as “Akshay urja diwas”. Akshay Urja Diwas advocates the essence of renewable energy in the sectors of bio energy, wind, hydro and solar energy.

Yes, the renewable energies are the solution to save non renewable resources. How many of us have already been using solar, wind or bio energy. May be very few. There are plenty of products and innovations available with respect to these renewable energies. Due to the raise in temperature in the cities, especially in metropolitan cities solar energy is the best alternative. One day this summer while going back to home, I was thinking Hyderabad can utilize solar energy to the maximum extent at least in 8 months in an year. But unfortunately I have been observing since one month, I dint see any solar energy utilization unit in the city.

There are plenty of solar energy utilization products in the market, few of them are solar home lighting system, solar water heater, solar dryer, solar cookers and many more.

Wind energy is one more solution for power generation in large and medium scale. These days there are residential turbines available. We can use these turbines on top of the floor and generate the power required for the house.

Bio energy is the best alternative solution for LPG. Bio gas best suits for Indian villages where biological waste can be converted into bio gas. Bio gas produce less carbon di oxide and carbon monoxide as compared to LPG. We can advise our friends, relatives or family who live in villages to use bio gas.

Dear friends, let us start using renewable resources, let us advise others to use them, let us save at least few renewable resources for future generations and let us save and build smarter planet.