Monday, February 25, 2013

ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರ ಜಯಂತ್ಯೋತ್ಸವ- ೨೦೧೩ ಮಾರ್ಚ್ ೨೩

ಈ ಬ್ಲಾಗಿನಲ್ಲಿ ನಾನು ಬರೆಯುವುದು ಬಹಳ ಕಡಿಮೆಯೇ! ನನ್ನ ಪ್ರವಾಸಗಳ ಪ್ರವಚನ ಮತ್ತು updateಗಳು ಇನ್ನೊಂದು www.pakkapravasi.blogspot.com ಅಲ್ಲಿ ಲಭ್ಯ. ಹೊದ ವರ್ಷ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರ  ಜಯಂತ್ಯೋತ್ಸವದ ಬಗ್ಗೆ ಬರೆದಿದ್ದೆ. ಮತ್ತೆ ಈ ವರ್ಷವೂ ಬರೆಯೋಣ ಅಂದುಕೊಂಡಾಗ ಈ ಬ್ಲಾಗ್ ನೆನಪಾಯಿತು.

ಮೊನ್ನೆ  ಆಫೀಸಿನಲ್ಲಿ ಒಬ್ಬ ಸ್ನೇಹಿತ ಕೇಳ್ತಿದ್ದ ತೋಟದಪ್ಪನವರಿಗೆ ಯಾರು ಮಕ್ಕಳಿರಲಿಲ್ಲವ ಅಂತ, ನನ್ನ ಬಾಯಿಂದ ಥಟ್ಟನೆ ಬಂದ ಉತ್ತರ ನಾವೆಲ್ಲಾ ಅವರ ಮಕ್ಕಳೇ ಎಂದು(ಇದು ಸಿನಿಮೀಯ ಅನಿಸಿದರು ಸತ್ಯ ಘಟನೆ). ಅಲ್ಲಿ ಓದಿದ ಎಲ್ಲರಿಗೂ ಊಟ-ವಸತಿ ಕೊಟ್ಟು ಮತ್ತು ಬದುಕಲು ಬೇಕಾದ ಎಲ್ಲ skillsಗಳನ್ನ ಕಲಿಸಿದ ಹಾಸ್ಟೆಲ್ ಅದು(ತಿಗಣೆಯನ್ನೂ ಸ್ನೇಹಿತನನ್ನಾಗಿ ಮಾಡಿದ ಹಾಸ್ಟೆಲ್ ಅಂದರೂ ಅದು ಅತಿಶಯೋಕ್ತಿಯಾಗಲಾರದು). ಇಂಥಹ ಒಂದು ಸುಂದರ ಛತ್ರದ/ಹಾಸ್ಟೆಲಿನ ಕರ್ತೃವಿನ ಜಯಂತ್ಯೋತ್ಸವವನ್ನ ಹಳೆಯ ವಿದ್ಯಾರ್ಥಿಗಳ ಬಳಗ ಮೊನ್ನೆ ೨೩ ಫೆಬ್ರವರಿಯಂದು ಹಾಸ್ಟೆಲಿನ ಆವರಣದಲ್ಲಿ ಆಚರಿಸಿತು.

ಅದು ರಕ್ತದಾನದ ಮೂಲಕ ಮತ್ತು ಅಲ್ಲಿರುವ ವಿದ್ಯಾರ್ಥಿಗಳಿಗೆ ಸ್ವಲ್ಪ ಜ್ಞಾನ ದಾಸೋಹದ ಮೂಲಕ... ನಮ್ಮ ವಿದ್ಯಾರ್ಥಿ ನಿಲಯದ ಧರ್ಮದರ್ಶಿ ರೇವಣ್ಣಸಿದ್ದಯ್ಯನವರು ಹೇಳಿದಂತೆ ಅಲ್ಲಿ ದಾನ ಮಾಡಿದ ರಕ್ತ ಪವಿತ್ರವಾದ, ಶುಭ್ರವಾದ, ಒಳ್ಳೆಯ ಮನಸ್ಸಿನಿಂದ ಮತ್ತು ಒಳ್ಳೆಯ ಉದ್ದೇಶಕ್ಕೆ ದಾನ ಮಾಡಿದ ರಕ್ತ. ಅದೂ ತೋಟದಪ್ಪನವರಂಥ ಮಹಾನ್ ದಾನಿಯ ನೆನಪಿನಲ್ಲಿ! ಸರಿಯಾಗಿ ೯೩ unitಗಳ ರಕ್ತವನ್ನು ದಾನ ಮಾಡಲಾಯಿತು. ಈ ಕಾರ್ಯಕ್ರಮವನ್ನು ಹಿರಿಯ ವಿದ್ಯಾರ್ಥಿ ಬಳಗ, ರೆಡ್ ಕ್ರಾಸ್ ಸಹಯೋಗದಿಂದ ಆಯೋಜಿಸಲಾಗಿತ್ತು. 

ರಕ್ತದಾನ ಮಾಡಿದ ಹಳೆಯ ಮತ್ತು ಈಗಿನ ವಿದ್ಯಾರ್ಥಿಗಳು!

ಸ್ವಲ್ಪ ತಡವಾಗಿ ಶುರುವಾದರೂ, ಬಹಳ ಬೇಗ ಅದರ ವೇಗವನ್ನು ಪಡೆದುಕೊಂಡಿತು. ರಕ್ತದಾನ ಕಾರ್ಯಕ್ರಮನ್ನ ಉದ್ಘಾಟಿಸಿ ಮಾತನಾಡಿದ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ಶ್ರೀ ಜಯಲಿನ್ಗಪ್ಪನವರು, ರಕ್ತದಾನದ ಮಹತ್ವ ಮತ್ತು ಅವರ ಅನುಭವಗಳನ್ನ ಮೆಲುಕು ಹಾಕಿದರು. ರೆಡ್ ಕ್ರಾಸ್ ಸಂಸ್ಥೆಯ ಡಾ|| ದಿವ್ಯಶ್ರೀ ರಕ್ತದಾನದ ಮಹತ್ವ, ಅವಶ್ಯಕತೆಗಳ ಬಗ್ಗೆ ತಿಳಿಸಿದರು. ಮಾತು ಮುಗಿದ ತಕ್ಷಣ ರಕ್ತದಾನ ಶುರುವಾಯಿತು. ಮೊದಲ ಬಾರಿಗೆ ರಕ್ತದಾನ ಮಾಡಿದ ನನ್ನ ಮಿತ್ರರು ರಾಜೇಶ್, ಅರುಣ್ ಮತ್ತು ಗೋಕುಲ್ ಬಹಳ ಸಂತೃಪ್ತಿಯಿಂದ ಕಂಡಿದ್ದು ಕಂಡು ಬಂತು.

ಉದ್ಯಮಿಯಾಗು, ಉದ್ಯೋಗ ನೀಡು!
ಮಧ್ಯಾನ, ಉದ್ಯಮಿಯಾಗು ಮತ್ತು ಉದ್ಯಮಿಯಾಗು ಎಂಬ ವಿಷಯದ ಮೇಲೆ ಡಾ|| ಚಂದ್ರಶೇಕರನ್ ಅವರ ಅನುಭವಗಳನ್ನ ಹಂಚಿಕೊಂಡರು. ಅವರ ಏಳು ಬೀಳುಗಳು, ಉದ್ಯಮಿ ಆಗಬೇಕಾದರೆ ಪಟ್ಟ ಶ್ರಮಗಳ ಪರಿಚಯವನ್ನ ಮಾಡಿಕೊಟ್ಟರು. ಅವರ ಅರ್ಧಾಂಗಿ "ಪೂರ್ತಿ-ಅಂಗಿಯಾಗಿ" ಕೆಲಸ ಮಾಡಿದ ತಮ್ಮ ದಿನಗಳ ಪುಟ ತೆರೆದಿಟ್ಟರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅದ್ಯಕ್ಷರು ಶ್ರೀ ಶಿವಾನಂದ್ ಮತ್ತು ಧರ್ಮದರ್ಶಿ ರೇವಣ್ಣಸಿದ್ದಯ್ಯನವರು ಉಪಸ್ಥಿತರಿದ್ದರು. 


1 comment:

Unknown said...

Good writeup man share this.